ಆನಂದ ಹಳ್ಳಿಗುಡಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಏಕಾಗ್ರತೆ ಮತ್ತು ಅತ್ಮವಿಶ್ವಾಸದಿಂದ ಬರೆಯಬೇಕು. ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಆಸಕ್ತಿಯಿಂದ ಗಮನಿಸಿದರೆ ಅತ್ಯಂತ ಸರಳವಾಗಿ ಅರಿಯಬಹುದು. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಅತಿಮುಖ್ಯ ಘಟ್ಟವಾಗಿದ್ದು ಬಹಳ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ತಿಳಿ ಹೇಳಿದರು.
ಶೋಭಾ ವೇದಪಾಠಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಬೇಡ, ಪಬ್ಲಿಕ್ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದಾಗ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದು ಎಂದು ಹೇಳಿದರು. ಜಯಶ್ರೀ ಅಂಗಡಿ, ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕರಾದ ಮಂಜುನಾಥ ಕಟ್ಟಿ, ಸರೋಜಾ ಮೇದಪಾಠಕ ಮತ್ತಿತರರು ಹಾಜರಿದ್ದರು. ಸಂತೋಷ ಕಠಾರೆ ಸ್ವಾಗತಿಸಿ, ಮೈಲಾರಪ್ಪ ಕುಣಿ ನಿರೂಪಿಸಿ, ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕೊಪ್ಪಳ: ನಗರದ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದಲ್ಲಿ ನೆಹರು ಯುವಕೇಂದ್ರ ಕೊಪ್ಪಳ ಯುವ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಸ್ವಚ್ಛ ಭಾರತ ಪ್ರಶಸ್ತಿಯನ್ನು ಕಿನ್ನಾಳ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಹಾಗೂ ಪಧಾದಿಕಾರಿಗಳಾದ ಮೈಲಾರಪ್ಪ ಕುಣಿ, ಲಿಂಗರಾಜ ಶಿರಗೇರಿ,ಸಂತೋಷ ಬೀಸನಳ್ಳಿ, ರಮೇಶ ಅಂಚೆಕಚೇರಿ ಇವರಿಗೆ ನೀಡಿ ಗೌರವಿಸಲಾಯಿತು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಪ್ಪ ಸಿಂದೋಗಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರ ಪಾತ್ರ ಏನು, ಸಂಘ ಸಂಸ್ಥೆಗಳು ಯಾವ ರೀತಿಯ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಬೇಕು ಹಾಗೂ ಸೇವೆ, ಶಿಕ್ಷಣ, ರಾಷ್ಟ್ರೀಯತೆಯ ಕುರಿತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಡಿ.ದಯಾನಂದ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಹನಸಿ, ರಾಮರಾವ್ ಬಿರಾದಾರ್, ಸಿದ್ದಲಿಂಗಯ್ಯ,ವೆಂಕಟೇಶ ಬ್ಯಾಡಗಿ, ಬಸಯ್ಯ ಹಿರೇಮಠ, ವಿರುಪಾಕ್ಷಪ್ಪ ಮೊರೇನಾಳ, ಶಂಕರ ಸುರಳ ಸೇರಿದಂತೆ ನೆಹರು ಯುವ ಕೇಂದ್ರದ ಸಿಬ್ಬಂದಿಗಳು, ವಿವಿಧ ಗ್ರಾಮಗಳ ಸಂಘಗಳ ಪಧಾದಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಕಿನ್ನಾಳ ನೇತೃತ್ವದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 156ನೇ ಜಯಂತೋತ್ಸವದ ಅಂಗವಾಗಿ ಬಹಿರಂಗ ಸಭೆ ಮತ್ತು ಸಮರ್ಥ ಸಾರಥಿಯೊಂದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಶ್ರೀ ಸ್ವಾಮಿ ವಿವೇಕಾನಂದ ವೃತ್ತ (ಕಾಮನಕಟ್ಟೆ)ಯಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಸಂಸ್ಥೆಯ ಅಧ್ಯಕ್ಷ ಮೌನೇಶ ಕಿನ್ನಾಳ ಮಾತನಾಡಿ ಶಿಕ್ಷಣ ಸಂಸ್ಕೃತಿ ಸ್ವಾವಲಂಬನೆ ಎನ್ನುವ ದ್ಯೇಯ ವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದರ ಕನಸಿನನಂತೆ ಸದೃಢ ಭಾರತಕ್ಕಾಗಿ ಸದೃಢ ಯುವಜನತೆ ತಯಾರಿಯೊಂದಿಗೆ ಅನೇಕ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದ್ದು ಸಮಾಜ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ನಂತರ ಮುಖ್ಯಭಾಷಣಕಾರರಾದ ವಸಂತ ಪೂಜಾರ ಮಾತನಾಡಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಪ್ರತಿಯೊಬ್ಬರೂ ಅಸಾಮಾನ್ಯರಾಗಿದ್ದಾರೆ ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎನ್ನುವ ಕುರಿತು ಉದಾಹರಣೆಗಳೊಂದಿಗೆ ವಿಷಯವನ್ನು ತಿಳಿಸಿ ವ್ಯಸನಮುಕ್ತರಾದಗ ಮಾತ್ರ ಯುವಜನತೆ ಸದೃಢರಾಗಲು ಸಾಧ್ಯ, ಜಾತಿ ಜನಾಂಗ ಭಾಷೆ ಎಲ್ಲವನು ದಾಟಿ ಸ್ವಂತಕ್ಕೆ ಸ್ವಲ್ಪ ದೇಶಕ್ಕೆ ಸರ್ವಸ್ವ ಎನ್ನುವ ನಿಟ್ಟಿನಲ್ಲಿ ಜಾಗೃತರಾಗಬೇಕು, ದೇಶಸೇವೆಗೆ ಮುಂದಾಗಬೇಕು ಎಂದರು
ನಂತರ ಅಧ್ಯಕ್ಷಿಯ ಭಾಷಣವನ್ನು ಕೆ.ವೆಂಕಾರೆಡ್ಡಿ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳ ಮಾತನಾಡಿದರು, ಮಂಜುನಾಥ ಏಣಿಗಿ ವೇಧಿಕೆಯಲ್ಲಿದ್ದರು ಬಹಿರಂಗ ಸಭೆ ನಂತರ ಗ್ರಾಮದ ಮುಖ್ಯರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು..
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ನರಸಿಂಹರಾವ್ ಕುಲಕರ್ಣಿ, ಪರಸಪ್ಪ ಗಡಗಿ, ಮಂಜುನಾಥ ಶಿರಗೇರಿ, ಉದಯಕುಮಾರ ಚಿತ್ರಗಾರ,ವಿರುಪಾಕ್ಷಪ್ಪ ಬಾರಕೇರ,ಮಲ್ಲಪ್ಪ ಉದ್ದಾರ, ಸಂತೋಷ ಕಠಾರೆ, ಲಿಂಗರಾಜ್ ಶಿರಗೇರಿ, ಮೈಲಾರಪ್ಪ ಕುಣಿ, ಮಾರ್ಕಂಡೇಶ್ವರ, ಕನಕಪ್ಪ ಉಪ್ಪಾರ, ವಿರೇಶ ವಾಲ್ಮೀಕಿ, ಅಮರೇಶ ಉದ್ದಾರ, ಮಂಜುನಾಥ ಬಡಗಲ್, ಸಂತೋಷ ಬೀಸನಳ್ಳಿ, ರಮೇಶ ಅಂಚೆಕಚೇರಿ,ಸಣ್ಣೆಪ್ಪ ಕರಬ್ಯಾಳಿ,ಸಂತೋಷ್,ರಘುವೀರ ಪತ್ತಾರ,ಬಸವರಾಜ ವಾಲ್ಮೀಕಿ,ಪ್ರಶಾಂತ ಹಿರೇಮಠ,ಸಂಗಮೇಶ ಪಾಗಿ,ರವಿಕಿರಣ ಕೆ,ಶಿವುಕುಮಾರ ಕೆ,ಉಮೇಶ ಬಂಡಿಹಾಳ,ಅಕ್ಷಯಕುಮಾರ್ ಪರಗಿ,ಮಂಜುನಾಥ ಗ್ವಾಡೇಕೇರ,ಹನುಮಂತ ಕುಂಬಾರ,ರಾಘು ಕಮ್ಮಾರ,ಪವನ್,ಅಣ್ಣಯ್ಯ ಜೋಗಿನ್, ಸರಸ್ವತಿ ಗಡಗಿ, ಮಮತಾ ಹಳಪೇಟೆ, ಉಮಾ ಬಡಿಗೇರ್ ಸೇರಿದಂತೆ ಕಿನ್ನಾಳ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಸ್ಥೆಯ ಸರ್ವ ಸದಸ್ಯರು ಭಾಗಿಯಾದರು. ರಾಘವೇಂದ್ರ ಕಿನ್ನಾಳ ನಿರೂಪಿಸಿದರು, ಪ್ರಶಾಂತ ತಿಮ್ಮಕ್ಕನವರ ವಂದಿಸಿದರು...
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೇ (ರಿ) ಕಿನ್ನಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನಾರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ ನಿಮ್ಯಾನ್ಸ್ ಬೆಂಗಳೂರು, ಯುವ ಸ್ಪಂದನಾ ಜೀವನ ಕೌಶಲ್ಯ ತರಬೇತಿ ಶಿಬಿರ ಹಾಗೂ ನೆಹರು ಯುವ ಕೆಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 125ನೇ ಚಿಕ್ಯಾಗೋ ಭಾಷಣ ವರ್ಷಾಚರಣೆಯ ಅಂಗವಾಗಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಕಿನ್ನಾಳದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸರೊಜಾ ಅವರು ವಹಿಸಿದ್ದರು ಮುಖ್ಯ ವಕ್ತರರಾದ ಹೊಸಪೇಟೆಯ ಕೇಶವ ಕೆ.ಎಸ್ ಮಾತನಾಡಿ ಸ್ವಾಮಿ ವಿವೇಕಾನಂದರ ಶಕ್ತಿ ಬಹು ಅಗಾಧವಾದದ್ದು. ಜಗತ್ತಿಗೆ ಭಾರತ ಎಂದರೇನು ಭಾರತದ ಶಕ್ತಿ ಏನು ಎಂಬುದನ್ನು ತಮ್ಮ 12 ನಿಮಿಷ ಚಿಕ್ಯಾಗೋ ಬಾಷಣದಲ್ಲಿ ತೆರೆದಿಟ್ಟರು ಅವರ ಬಾಷಣಕ್ಕೆ ಜಗತ್ತಿನ ಎಲ್ಲಾ ಧರ್ಮಗಳು, ದೇಶಗಳು ತಲೆದೂಗಿದವು, ಸರ್ವವೂ ನಿನ್ನಲ್ಲೆ ಅಡಗಿದೆ. ಸದೃಡ ಯುವಕರಿಂದ ಮಾತ್ರ ದೇಶದಲ್ಲಿ ಬದಲಾವಣೆ ಸಾದ್ಯ ಎಂಬುದರ ಕುರಿತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಮತ್ತು ದೇಶ ಮೋದಲು ಎನ್ನುವ ಅವರ ಪರಿಕಲ್ಪನೆಯನ್ನು ಕಾರ್ಯಕ್ರಮದಲ್ಲಿ ವಿಸ್ತುøತವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುನಾಥ ಶಿರಗೇರಿ, ನೆಹರು ಯುವ ಕೆಂದ್ರದ ಲೆಕ್ಕಾದಿಕಾರಿಗಳಾದ ಮಂಜುಳಾ ಮೂಲಿಮನಿ, ಯುವ ಕಾರ್ಯಕರ್ತರಾದ ವಿರೇಶ ಹಾಲಗುಂಡಿ, ಸ್ವಾಮಿ ವಿವೇಕಾನಂದ ಸಂಸ್ಥೆಯ ಸದಸ್ಯರಾದ ರವಿಗೌಡ ವಾಲ್ಮಕಿ, ಪ್ರದಿಪ್ ಶಿರಗೇರಿ, ಖಾಜಾವಲಿ ಬೆಣಕಲ್, ಶಿವಾನಂದ ವಾಲ್ಮಿಕಿ, ರಾಮು ಕಿನ್ನಾಳ, ಪ್ರಶಾಂತ ಕಿನ್ನಾಳ, ಆಶ್ವತ್ ನಾರಾಯಣ ಸಾಗರ, ನವೀನ ಬಲೂಚಗಿ, ಮೈಲಾರಪ್ಪ ಕುಣಿ, ಬಸವರಾಜ ನಾಯಕ, ಸೇರಿದಂತೆ ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಸಂಸ್ಥೆಯ ಅದ್ದಕ್ಷ ಮೌನೇಶ ಕಿನ್ನಾಳ ನಿರೂಪಿಸಿದರು ಸಂತೋಷ ಕಠಾರೆ ವಂದಿಸಿದರು
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಹಾಗೂ ನೆಹರೂ ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ 122 ನೇ ಪಂಡಿತ ದೀನ್ ದಯಾಳ ಉಪದ್ಯಾಯ ಜನ್ಮ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷರಾದ ಮೌನೇಶ ಕಿನ್ನಾಳ ಹಾಗೂ ಯುವ ಯುವಕರು ಯುವ ನಾಯಕರಾಗಿರುವಂತಹ ಹಾಗೂ ಹಿತೈಸಿಗಳು ಹಾಗೂ ಸಮಾಜ ಸೇವಕರಾದಂತಹ ಮಂಜುನಾಥ ಶಿರಿಗೇರಿ ಅದೇ ರೀರಿಯಾಗಿ ವಸತಿ ನಿಲಯದ ಮುಖ್ಯಸ್ಥರಾದ ವಿರೇಶ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು
ಅದೇ ರೀತಿಯಾಗಿ ಸಂಸ್ಥೆಯ ವಿವೇಕಾನಂದ ಅದರ ಅಧ್ಯಕ್ಷರಾದ ಮೌನೇಶ ಕಿನ್ನಾಳ ಅವರು ಮಾತನಾಡುತ್ತ ಸಂಸ್ಥೆಯ ಕುರಿತು ಪ್ರಾಸ್ತವಿಕ ಮಾತನಾಡಿವರು.
ಹಾಗೂ ಶ್ರೀ ಸ್ವಾಮಿ ವಿವೇಕಾನಂದÀ ಸಂಸ್ಥೆ ಜಂಟಿ ಕಾರ್ಯದಶಿಗಳಾ ರಾಘವೇಂದ್ರ ಉಪ್ಪಾರ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಪದಾಧಿಕಾರಿಗಳ ನವೀನ್ ಬಳೂಟಗಿ, ಮೈಲಾರಪ್ಪ ಕುಣಿ, ಲಿಂಗರಾಜ ಶಿರಿಗೇರಿ ಹಾಗೂ ಎಲ್ಲಾ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಇದ್ದರು.
Shree SwamiVivekananda seva samste(R) kinnal conducted
an awareness campaign for promoting BHIM App. on 25th March, 2018. The BHIM App
is an important step for government initiative of DIGITAL INDIA. An easy-to-use
application for cashless transaction, BHIM (Bharat Interface for Money)
developed by National Payments Corporation of India (NPCI) has been named after
Dr. Bhimrao Ambedkar and is a e-payment platform. The App supports all Indian
banks and allows the use to transfer money between the bank accounts of any two
parties.
The secretory Mr
Mailarappa Kuni approached the small vendors around the features of BHIM App.
It was a small step taken by SVSKNL create a NEW INDIA.
ಕೊಪ್ಪಳ : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ(ರಿ) ಹಾಗೂ ನೆಹರೂ ಯುವ ಕೇಂದ್ರ ಕೊಪ್ಪಳ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಸಮ್ಮರ್ ಇಂಟನ್ರ್ಸಿಫ್-100 ತಾಸು ಶ್ರಮಧಾನ ಕಾರ್ಯಕ್ರಮಕ್ಕೆ ಗ್ರಾಮದ ಸ.ಹಿ.ಪ್ರಾ. ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಶ್ರಮಧಾನ ಮಾಡಿ ಚಾಲನೆ ನೀಡುವುದರ ಮೂಲಕ ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕಿನ್ನಾಳ ಸ್ವಚ್ಚ ಭಾರತದ ಪ್ರತಿಜ್ಞೆಯನ್ನು ಮಾಡಿಸುವ ಮೂಲಕ ನಾನು ಭಾರತ ಸ್ವಚ್ಚತೆಯನ್ನು ಕಾಪಾಡುವಲ್ಲಿ ನನ್ನ ಸಮಯವನ್ನು ಮೀಸಲಿಟ್ಟು ಸಹಕರಿಸುತ್ತೇನೆ ಹಾಗೂ ಸ್ವಯಂ ಸ್ಪೂರ್ತಿಯಿಂದ ಭಾರತದ ಸ್ಚಚ್ಚತೆಯನ್ನು ಕಾಪಾಡುವಲ್ಲಿ ವಾರದಲ್ಲಿ ಎರಡು ಗಂಟೆಗಳನ್ನು ಮೀಸಲಿಡುತ್ತೇನೆ. ಕಸವನ್ನು ಎಲ್ಲಿ ಅಂದರೆ ಅಲ್ಲಿ ಎಸೆಯುವುದಿಲ್ಲ ಮತ್ತು ಬೇರೆಯವರು ಎಸೆಯಲು ಬೀಡುವುದಿಲ್ಲ.
ಸ್ಚಚ್ಚತೆಗಾಗಿ ನಾನು, ನನ್ನ ಕುಟುಂಬ, ನನ್ನ ಸುತ್ತಮುತ್ತಲಿನ ಜನರನ್ನು ಭಾರತದ ಸ್ಚಚ್ಚತಾ ಅಭಿಯಾನಕ್ಕೆ ಪ್ರೋತ್ಸಾಹಿಸುತ್ತೇನೆ ಎಂದು ಪ್ರಮಾಣ ಮಾಡಿಸಲಾಯಿತು.
ಶಾಲೆಯ ಶಿಕ್ಷಕರಾದ ಶ್ರೀಮತಿ ಗಂಗುಭಾಯಿ ಜೋಷಿ ಮಾತನಾಡಿ ಮನುಷ್ಯ ಹೇಗೆ ತನ್ನ ಹಕ್ಕುಗಳನ್ನು ಚಲಾಯಿಸುತ್ತಾನೋ ಹಾಗೇಯೆ ನಮ್ಮ ಕರ್ತವ್ಯಗಳನ್ನು ಕೂಡಾ ನಿಭಾಯಿಸಬೇಕು ಇದರಲ್ಲಿ ನಮ್ಮ ಮನೆ, ನಮ್ಮ ಶಾಲೆ, ನಮ್ಮ ಊರು, ಜಿಲ್ಲೆ, ರಾಜ್ಯ ಮತ್ತು ದೇಶವನ್ನು ಸ್ಚಚ್ಚವಾಗಿಸುವುದು ನಮ್ಮ ಕತ್ರ್ಯವ್ಯಗಳಲ್ಲಿ ಬಹುಮುಖ್ಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಯಾದ ಮೈಲಾರಪ್ಪ ಕುಣಿ ಮಾತನಾಡಿ ಪ್ರತಿಯೊಬ್ಬರು ಸ್ವಚ್ಚತೆಗೆ ಆಧ್ಯತೆಯನ್ನು ನೀಡುವ ಮೂಲಕ ಒಂದು ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವ ಮಾತನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಮೊದಲನೆ ಹೆಜ್ಜೆ ಸ್ಚಚ್ಚತೆಯ ಕಡೆಗೆ ಎನ್ನುವುದನ್ನು ಪಾಲಿಸಬೇಕಾಗಿದೆ ಹಾಗೂ ನೀವು ಕಸವನ್ನು ಶೆಖಕರಿಸಿ ಒಣ ಮತ್ಯು ಹಸಿ ತ್ಯಾಜವನ್ನು ಬೇರೆ ಬೇರೆಯಾಗಿಸಿ ಪರಿಸರ ಸಂರಕ್ಷಣೆಯನ್ನು ಮಾಡಬೇಕು ಕಡ್ಡಾಯವಾಗಿ ಪ್ರತಿ ಮನೆಯಲ್ಲೂ ಶೌಚಾಲಯವನ್ನು ಉಪಯೋಗಿಸುವಂತೆ ಮನವೊಲಿಸಬೇಕೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಗಣೇಶ ಬಣ್ಣದ, ಶೇಖರಪ್ಪ ಮುಧೂಳು, ರೇಣುಕಾ ನಾಗಾವಿ, ಜಲಜಾಕ್ಷಿ ಕೆ. ಚಂದ್ರಕಾಂತ ಕಮ್ಮಾರ, ವಿಜಯಲಕ್ಷ್ಮೀ ಬಿಜ್ಜಳ, ನಾಗಪ್ಪ ಎಳಂಬಿ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ರಂಜಿತ್ ಕಳ್ಳಿಮನಿ, ರಮೇಶ ಪೊಸ್ಟ, ಸಂತೋಷ ಕಠಾರೆ, ಮಂಜುನಾಥ, ಪ್ರವೀಣ ಇಂಡಿ, ಸಂತೋಷ ಬಿಸರಳ್ಳಿ, ಲಿಂಗರಾಜ ಶಿರಗೇರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.